welcome to lavalavika


I made this widget at MyFlashFetish.com.

Tuesday, April 10, 2012

[ಕುವೆಂಪು]ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

Kuvempu.jpg


















ಕುವೆಂಪು - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (೧೯೦೪ - ೧೯೯೪) - ಕನ್ನಡವು ಪಡೆದ ಅತ್ಯುತ್ತಮ ಕವಿ, 'ರಾಷ್ಟ್ರಕವಿ'. ಜ್ಞಾನಪೀಠಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರಥಮ ವ್ಯಕ್ತಿ. 'ವಿಶ್ವ ಮಾನವ'. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ.
.ಜೀವನ.
ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳ್ಳಿ(ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾದರು.ಇವರು ಮೈಸೂರಿನ ಒಂಟಿಕೊಪ್ಪಲುವಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ). 
ವಿಶ್ವ ಮಾನವ ಸಂದೇಶ 

ಪ್ರತಿಯೊಂದು ಮಗುವೂ ಹುಟ್ಟುತ್ತಲೆ -ವಿಶ್ವ ಮಾನವ. ಬೆಳೆಯುತ್ತಾ ನಾವು ಅದನ್ನು ದೇಶ, ಭಾಷೆ, ಮತ, ಜಾತಿ,ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ”’ವಿಶ್ವಮಾನವ”’ನನ್ನಾಗಿ ಮಾಡುವುದೆ ವಿದ್ಯೆ, ಸಂಸ್ಕೃತಿ, ನಾಗರಿಕತೆಯ ಕರ್ತವ್ಯವಾಗಬೇಕು ಈ ದರ್ಶನವನ್ನೆ ’ವಿಶ್ವಮಾನವ ಗೀತೆ’ ಸಾರುತ್ತದೆ.
             ಓ ನನ್ನ ಚೇತನ,
             ಆಗು ನೀ ಅನಿಕೇತನ
             ರೂಪರೂಪಗಳನು ದಾಟಿ,
             ನಾಮಕೋಟಿಗಳನು ಮೀಟಿ,
             ಎದೆಯ ಬಿರಿಯೆ ಭಾವದೀಟಿ,
             ಓ ನನ್ನ ಚೇತನ,
             ಆಗು ನೀ ಅನಿಕೇತನ!
             ನೂರು ಮತದ ಹೊಟ್ಟ ತೂರಿ,
             ಎಲ್ಲ ತತ್ತ್ವದೆಲ್ಲೆ ಮೀರಿ,
             ನಿರ್ದಿಗನ೦ತವಾಗಿ ಏರಿ,
             ಓ ನನ್ನ ಚೇತನ,
             ಆಗು ನೀ ಅನಿಕೇತನ!
             ಎಲ್ಲಿಯೂ ನಿಲ್ಲದಿರು;
             ಮನೆಯನೆ೦ದೂ ಕಟ್ಟದಿರು;
             ಕೊನೆಯನೆ೦ದೂ ಮುಟ್ಟದಿರು;
             ಓ ಅನ೦ತವಾಗಿರು!
             ಓ ನನ್ನ ಚೇತನ,
             ಆಗು ನೀ ಅನಿಕೇತನ!
             ಅನ೦ತ ತಾನ್ ಅನ೦ತವಾಗಿ
             ಆಗುತಿಹನೆ ನಿತ್ಯಯೋಗಿ;
             ಅನ೦ತ ನೀ ಅನ೦ತವಾಗು;
             ಆಗು, ಆಗು, ಆಗು, ಆಗು,
             ಓ ನನ್ನ ಚೇತನ,
             ಆಗು ನೀ ಅನಿಕೇತನ! 
ಸಾಹಿತ್ಯ 
ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ಧಾರವಾಡದಲ್ಲಿ ನಡೆದ ೧೯೫೭ನೇ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷತೆ ವಹಿಸಿದ್ದರು. ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಇವರ ಶ್ರೀ ರಾಮಾಯಣ ದರ್ಶನಂ ಕೃತಿಯು
ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ
ಇವರು 'ಜೈ ಭಾರತ ಜನನಿಯ ತನುಜಾತೆ...' ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರು ಕವಿ. ಇವರು ಬರೆದ
'ಸ್ವಾಮಿ ವಿವೇಕಾನಂದ'ರ ಬಗೆಗಿನ ಕೃತಿ ಬಹಳ ಜನಪ್ರಿಯವಾದದ್ದು.
ಇವರ ವಿಶ್ವಮಾನವ ಸಂದೇಶ ಅತಿ ಪ್ರಸಿದ್ಡವಾಗಿದೆ.
 ಶ್ರೀ ರಾಮಾಯಣ ದರ್ಶನಂ 
ಕುವೆಂಪುರವರು ಬರೆದ ಈ ಕೃತಿಯು ಜ್ಞಾನಪೀಠಪ್ರಶಸ್ತಿ ಪುರಸ್ಕೃತವಾಗಿದೆ. ಕನ್ನಡದ ಅತ್ಯಮೂಲ್ಯ 
ಗ್ರಂಥಗಳಲ್ಲಿ ಒಂದು, ಈ ಕೃತಿ. ಈ ಕೃತಿ ಕನ್ನಡದ ಮೊದಲ ಆಧುನಿಕ ಮಹಾಕಾವ್ಯ; 
ಸರಳರಗಳೆಯನ್ನು ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಬಳಸಲಾಗಿದೆ. 
ಕೃತಿಗಳು
ಕಾದಂಬರಿ:
ಕಾನೂರು ಹೆಗ್ಗಡತಿ (ಚಲನ ಚಿತ್ರವಾಗಿದೆ)
 ಮಲೆಗಳಲ್ಲಿ ಮದುಮಗಳು (ಧಾರಾವಾಹಿಯಾಗಿದೆ)
ನಾಟಕಗಳು:
  ಬೆರಳ್ಗೆ ಕೊರಳ್
 ಶೂದ್ರ ತಪಸ್ವಿ 
 ಸ್ಮಶಾನ ಕುರುಕ್ಷೇತ್ರ
 ರಕ್ತಾಕ್ಷಿ
 ಬಿರುಗಾಳಿ
 ಯಮನ ಸೋಲು
 ನನ್ನ ಗೋಪಾಲ (ಮಕ್ಕಳ ನಾಟಕ)
 ವಾಲ್ಮೀಕಿಯ ಭಾಗ್ಯ
 ಮಹಾರಾತ್ರಿ
 ಜಲಗಾರ
 ಚಂದ್ರಹಾಸ
 ಬಲಿದಾನ
ಮೋಡಣ್ಣನ ತಮ್ಮ (ಮಕ್ಕಳ ನಾಟಕ) 
ಚಿತ್ರ ಪ್ರಬಂಧ:
 ಮಲೆನಾಡಿನ ಚಿತ್ರಗಳು 
ಆತ್ಮ ಚರಿತ್ರೆ:
 ನೆನಪಿನ ದೋಣಿಯಲ್ಲಿ 
ಕಾವ್ಯಗಳು:
 ಶ್ರೀ ರಾಮಾಯಣ ದರ್ಶನ೦
 ಕೊಳಲು
 ಅಗ್ನಿಹಂಸ
 ಅನಿಕೇತನ
 ಅನುತ್ತರಾ
 ಇಕ್ಶುಗಂಗೋತ್ರಿ
 ಕದರಡಕೆ
 ಕಥನ ಕವನಗಳು
 ಕಲಾಸುಂದರಿ
 ಕಿಂಕಿಣಿ
 ಕೃತ್ತಿಕೆ
 ಜೇನಾಗುವ
 ನವಿಲು
 ಪಕ್ಷಿಕಾಶಿ
 ಚಿತ್ರಾಂಗದಾ
 ಪ್ರೇತಕ್ಯು
 ಪ್ರೇಮಕಾಶ್ಮೀರ
 ಮಂತ್ರಾಕ್ಷತೆ
 ಷೋಡಶಿ
 ಹಾಳೂರು
 ಕೋಗಿಲೆ
 ಪಾಂಚಜನ್ಯ
 ಕುಟೀಚಕ 
ಕಥಾಸಂಕಲನ:
ನನ್ನ ದೇವರು ಮತ್ತು ಇತರ ಕಥಗಳು

ಅಮರೇಶ ನುಗಡೋಣಿ


 

 ಅಮರೇಶ ನುಗಡೋಣಿ ಇವರು  ೧೯೬೦ರಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನುಗಡೋಣಿಯಲ್ಲಿ ಜನಿಸಿದರು.

ವೃತ್ತಿ

ಅಮರೇಶ ನುಗಡೋಣಿಯವರು ಹಂಪೆಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ.

ಕೃತಿಗಳು  

ಕವನ ಸಂಕಲನ

  • ನೀನು, ಅವನು, ಪರಿಸರ

ಕಥಾಸಂಕಲನ

  • ಮಣ್ಣು ಸೇರಿತು ಬೀಜ
  • ಅರಿವು (ನವಸಾಕ್ಷರರಿಗಾಗಿ)
  • ತಮಂಧದ ಕೇಡು
  • ಮುಸ್ಸಂಜೆಯ ಕಥಾನಕಗಳು
  • ಸವಾರಿ