welcome to lavalavika


I made this widget at MyFlashFetish.com.

Sunday, December 19, 2010

ದಾ.ರ.ಬೇಂದ್ರೆ ಅಂಬಿಕಾತನಯದತ್ತ




ಈಗ್ಗೆ ಸುಮಾರು ೧೧೨ ವರ್ಷಗಳಹಿಂದೆ, ೧೮೯೬ ರ ಜನವರಿ, ೩೧ ರಂದು, ಧಾರವಾಡದ ಪುಣ್ಯಭೂಮಿಯಲ್ಲಿ ಮರಾಠಿಮೂಲದ ಚಿತ್ಪಾವನ್ ಬ್ರಾಹ್ಮಣರ ಮನೆಯಲ್ಲಿ ಒಂದು ಶಿಶು ಜನಿಸಿ, ಬೃಹತ್ ಪ್ರಮಾಣದಲ್ಲಿ ಬೆಳೆದು, ಕರ್ನಾಟಕ ಮನೆಮನೆಗಳಲ್ಲಿ ಕನ್ನಡಭಾಷೆಯ ಸಾಹಿತ್ಯಪರಂಪರೆಯನ್ನು ಸುಮಾರು ೮ ದಶಕಗಳ ಕಾಲ ಮೆರೆಸಿ, ಕನ್ನಡ ಸಾರಸ್ವತಲೋಕವನ್ನು ಸಮೃದ್ದಿಮಾಡಿತು. ಆ ಮಗುವೇ ಮುಂದೆ ಬೆಳೆದು, ನಮಗೆಲ್ಲಾ ’ಅಂಬಿಕಾತನಯದತ್ತ ’ ನೆಂದು ಹೆಸರುವಾಸಿಯಾಗಿರುವುದು, ನಮ್ಮೆಲ್ಲರಿಗೂ ತಿಳಿದ ಸಂಗತಿ. ಕನ್ನಡಸಾರಸ್ವತ ಲೋಕಕ್ಕೆ ಅವರ ಕೊಡುಗೆ ಅನನ್ಯ !
ಧಾರವಾಡದ ಮಣ್ಣಿನಲ್ಲಿ, ಕನ್ನಡದ ಜೊತೆಗೆ, ಮರಾಠಿ ಭಾಷೆಯ ಕಂಪು ಹಾಗೂ ಅದರ ಅದ್ಭುತಸೌಂದರ್ಯವನ್ನು ಅನೇಕ ಸನ್ನಿವೇಷಗಳಲ್ಲಿ ಕಾಣುತ್ತೇವೆ. ಕನ್ನಡ-ಮರಾಠಿಭಾಷೆಗಳೆರಡೂ ಅಂತರ್ಜಲದಂತೆ ಪ್ರವಹಿಸಿ ಬೆರೆತಿರುವುದರಿಂದ ಅಲ್ಲಿನ ಕನ್ನಡದ ಸೊಗಡೇ ಬೇರೆ ! ಇದು ಎಲ್ಲರಿಗೂ ತಿಳಿದ ಸಂಗತಿ. ಗಮನಿಸಬಹುದಾದ ಒಂದು ಅಂಶವೆಂದರೆ, ಧಾರವಾಡದ ಬಹುತೇಕ ಕವಿಗಳ ಮನೆಮಾತು ಮರಾಠಿ, ಆದರೆ, ಕನ್ನಡಭಾಷೆಯಬಗ್ಗೆ ಅಪಾರ ಒಲವಿನಿಂದಾಗಿ ಉತ್ಕೃಷ್ಟ ಸಾಹಿತ್ಯರಚನೆಯಾಯಿತು. [ಮೊದಲು, ಭಾಷಾವಾರು ಪ್ರಾಂತ್ಯಗಳಾಗಿ ಬಿಭಾಗಿಸುವ ಮುನ್ನ, ಧಾರವಾಡ ಬಾಂಬೆಪ್ರಾವಿನ್ಸ್ ನಲ್ಲಿದ್ದ ಪ್ರಯುಕ್ತ, ಮರಾಠಿಭಾಷೆಯ ಪ್ರಭಾವ ಅಧಿಕವಾಗಿರುವ ಕಾಣಬರುತ್ತದೆ.]
ಬೇಂದ್ರೆಯವರ [೧೮೯೬-೧೯೮೧] ಬಗ್ಗೆ ಕುರ್ತುಕೋಟಿಯವರು, ಹಾಗೂ ಅಸೋಸಿಯೇಷನ್ ಗೆ ಭೇಟಿಕೊಟ್ಟಿದ್ದ ಅನೇಕರು ಹಿಂದೆ ತಮ್ಮ ಭಾಷಣದಲ್ಲಿ ಅನುಭವಗಳನ್ನು ವ್ಯಕ್ತಪಡಿಸಿದ್ದರು. ಕಣವಿಯವರು ಹಿಂದೆ, ಅಸೋಸಿಯೇಷನ್ ನ ’ಅಮೃತಮಹೋತ್ಸವ,’ ದಲ್ಲಿ ಪಾಲುಗೊಂಡ ಸವಿನೆನೆಪನ್ನು ಎಲ್ಲರೊಡನೆ ಹಂಚಿಕೊಂಡರು. ಬೇಂದ್ರೆಯವರಿಗೆ ಮುಂಬೈನ ಪರಿಸರ ಹಾಗೂ ಅದರಬಗ್ಗೆ ಭಾವನಾತ್ಮಕವಾಗಿದ್ದ ಸಂಬಂಧ ಅವರ ಅಂತ್ಯದವರೆಗೂ ಹಿಂಬಾಲಿಸಿತ್ತು ಎನ್ನುವಮಾತಿಗೆ ಉದಾಹರಣೆಕೊಡುತ್ತಾ, ಮುಂಬೈನ ಆಕಾಶವಾಣಿಯಲ್ಲಿ ಅವರ ಕೊನೆಯ ಕವನ ಪ್ರಸಾರವಾಯಿತು, ಎನ್ನುವಮಾತನ್ನು ಸ್ಮರಿಸಿಕೊಂಡರು. ತಮ್ಮ ೮೫ ರಪ್ರಾಯದಲ್ಲಿ ಅವರು, 'ಹರಿಕಿಷನ್ ದಾಸ್' ಆಸ್ಪತ್ರೆಯಲ್ಲಿದಾಖಲಾಗಿದ್ದು ಅಲ್ಲಿಯೇ ಕೊನೆಯುಸಿರೆಳೆದರು. ಆದಿನದ ಸಾಯಂಕಾಲವೇ, ಮುಂಬೈ ನ ದಾದರ್ ಬಳಿಯ ಶಿವಾಜಿಪಾರ್ಕ್ ಸ್ಮಶಾನದಲ್ಲಿ ಅವರ ಅಂತಿಮಕ್ರಿಯೆ ಜರುಗಿತು. ಅದಾದ ೧೧ ದಿನಗಳನಂತರ ಅವರ ಚಿತಾಭಸ್ಮ, ಅವರ ಪ್ರೀತಿಯ ಹುಟ್ಟಿದೂರಾಗಿದ್ದ ಧಾರವಾಡಕ್ಕೆ ತಂದರು.
ಡಾ. ಬೇಂದ್ರೆಯವರ ವ್ಯಕ್ತಿಚಿತ್ರ, ಹಾಗೂ ಕಾವ್ಯಸಂಕಲನಗಳ ಬಗ್ಗೆ ನಮಗೆ ’ಇಂಟರ್ನೆಟ್,’ ನಲ್ಲೂ ಸಹಿತ ಮಾಹಿತಿ ಲಭ್ಯವಿದೆ :
(ಪ್ರಥಮ ಆವೃತ್ತಿಯ ವರ್ಷದೊಂದಿಗೆ)
* ೧೯೨೨: ಕೃಷ್ಣಾಕುಮಾರಿ;
* ೧೯೩೨: ಗರಿ;
* ೧೯೩೪: ಮೂರ್ತಿ ಮತ್ತು ಕಾಮಕಸ್ತೂರಿ;
* ೧೯೩೭: ಸಖೀಗೀತ;
* ೧೯೩೮: ಉಯ್ಯಾಲೆ;
* ೧೯೩೮: ನಾದಲೀಲೆ;
* ೧೯೪೩: ಮೇಘದೂತ;
* ೧೯೪೬: ಹಾಡು ಪಾಡು;
* ೧೯೫೧: ಗಂಗಾವತರಣ;
* ೧೯೫೬: ಸೂರ್ಯಪಾನ;
* ೧೯೫೬: ಹೃದಯಸಮುದ್ರ;
* ೧೯೫೬: ಮುಕ್ತಕಂಠ;
* ೧೯೫೭: ಚೈತ್ಯಾಲಯ;
* ೧೯೫೭: ಜೀವಲಹರಿ;
* ೧೯೫೭: ಅರಳು ಮರಳು;
* ೧೯೫೮: ನಮನ;
* ೧೯೫೯: ಸಂಚಯ;
* ೧೯೬೦: ಉತ್ತರಾಯಣ;
* ೧೯೬೧: ಮುಗಿಲಮಲ್ಲಿಗೆ;
* ೧೯೬೨: ಯಕ್ಷ ಯಕ್ಷಿ;
* ೧೯೬೪: ನಾಕುತಂತಿ;
* ೧೯೬೬: ಮರ್ಯಾದೆ;
* ೧೯೬೮: ಶ್ರೀಮಾತಾ;
* ೧೯೬೯: ಬಾ ಹತ್ತರ;
* ೧೯೭೦: ಇದು ನಭೋವಾಣಿ;
* ೧೯೭೨: ವಿನಯ;
* ೧೯೭೩: ಮತ್ತೆ ಶ್ರಾವಣಾ ಬಂತು;
* ೧೯೭೭: ಒಲವೇ ನಮ್ಮ ಬದುಕು;
* ೧೯೭೮: ಚತುರೋಕ್ತಿ ಮತ್ತು ಇತರ ಕವಿತೆಗಳು;
* ೧೯೮೨: ಪರಾಕಿ;
* ೧೯೮೨: ಕಾವ್ಯವೈಖರಿ;
* ೧೯೮೩: ತಾ ಲೆಕ್ಕಣಕಿ ತಾ ದೌತಿ;
* ೧೯೮೩: ಬಾಲಬೋಧೆ;
* ೧೯೮೬: ಚೈತನ್ಯದ ಪೂಜೆ;
* ೧೯೮೭: ಪ್ರತಿಬಿಂಬಗಳು;
ವಿಮರ್ಶೆ :
೧೯೩೭: ಸಾಹಿತ್ಯ ಮತ್ತು ವಿಮರ್ಶೆ;
೧೯೪೦: ಸಾಹಿತ್ಯಸಂಶೋಧನೆ;
೧೯೪೫: ವಿಚಾರ ಮಂಜರಿ;
೧೯೫೪: ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ;
೧೯೫೯: ಮಹಾರಾಷ್ಟ್ರ ಸಾಹಿತ್ಯ;
೧೯೬೨: ಕಾವ್ಯೋದ್ಯೋಗ;
೧೯೬೮: ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು;
೧೯೭೪: ಸಾಹಿತ್ಯದ ವಿರಾಟ್ ಸ್ವರೂಪ;
೧೯೭೬: ಕುಮಾರವ್ಯಾಸ ಪುಸ್ತಿಕೆ;
ಸಣ್ಣ ಕಥೆಗಳು :
೧೯೪೦: ನಿರಾಭರಣ ಸುಂದರಿ;
ನಾಟಕಗಳು :
* ದೆವ್ವದ ಮನೆ;
* ಹಳೆಯ ಗೆಣೆಯರು;
* ಸಾಯೊ ಆಟ;
* ತಿರುಕರ ಪಿಡುಗು;
* ಗೋಲ್;
* ಉದ್ಧಾರ;
* ಜಾತ್ರೆ;
* ನಗೆಯ ಹೊಗೆ;
* ಮಂದೀ ಮದಿವಿ;
* ಮಂದೀ ಮಕ್ಕಳು;
* ಮಂದೀ ಮನಿ;
* ಆ ಥರಾ ಈ ಥರಾ;
* ಶೋಭನಾ;
* ಮಕ್ಕಳು ಅಡಿಗೆ ಮನೆ ಹೊಕ್ಕರೆ;
ಅನುವಾದ :
* ಉಪನಿಷತ್ ರಹಸ್ಯ( ಮೂಲ: ಶ್ರೀ ರಾನಡೆ (೧)
* ಭಾರತೀಯ ನವಜನ್ಮ(ಮೂಲ:ಶ್ರೀ ಅರವಿಂದ (೨)
* ಶ್ರೀ ಅರವಿಂದರ ಯೋಗ, ಆಶ್ರಮ ಮತ್ತು ತತ್ವೊಪದೇಶ;
* ಚೀನಾದ ಬಾಳು ಬದುಕು;
* ಗುರು ಗೋವಿಂದಸಿಂಗ;
* ನೂರೊಂದು ಕವನ( ಮೂಲ: ಶ್ರೀ ರವೀಂದ್ರನಾಥ ಠಾಕೂರ);
* ಕಬೀರ ವಚನಾವಳಿ;
* ಭಗ್ನಮೂರ್ತಿ(ಮೂಲ ಮರಾಠಿ: ಶ್ರೀ ಅ.ರಾ.ದೇಶಪಾಂಡೆ);
ಮರಾಠಿ ಕೃತಿಗಳು :
* ಸಂವಾದ;
* ವಿಠ್ಠಲ ಸಂಪ್ರದಾಯ;
* ಶಾಂತಲಾ( ಕನ್ನಡದಿಂದ ಅನುವಾದ:ಮೂಲ:ಕೆ.ವಿ.ಅಯ್ಯರ್)
('ಗಂಗಾವತರಣ'). ಅವುಗಳ ವಿವರಗಳನ್ನು, ಕೆಳಗೆ ನಮೂದಿಸಲಾಗಿದೆ. ಕೆಲವು ಕವಿತೆಗಳು ಅವರು ಬರೆದದ್ದು ಇದೆ.
ಕಾವ್ಯಸಂಕಲನ [ಕಣವಿ]
* ಕಾವ್ಯಾಗ್ನಿ
* ಭಾವಜೀವಿ
* ಆಕಾಶಬುಟ್ಟಿ
* ಮಧುಚಂದ್ರ
* ಮಣ್ಣಿನ ಮೆರವಣಿಗೆ
* ದೀಪಧಾರಿ
* ನೆಲ ಮುಗಿಲು
* ಎರಡು ದಡ
* ನಗರದಲ್ಲಿ ನೆರಳು
* ಜೀವಧ್ವನಿ
* ಕಾರ್ತೀಕದ ಮೋಡ
* ಜೀನಿಯಾ
* ಹೊಂಬೆಳಕು
* ಶಿಶಿರದಲ್ಲಿ ಬಂದ ಸ್ನೇಹಿತ
* ಚಿರಂತನ ದಾಹ(ಆಯ್ದ ಕವನಗಳು)
* ಹೂವು ಹೊರಳುವವು ಸೂರ್ಯನ ಕಡೆಗೆ

No comments:

Post a Comment