welcome to lavalavika


I made this widget at MyFlashFetish.com.

Tuesday, May 22, 2012

ಮೈಕೇಲ್‌ ಫ್ಯಾರಡೆ

 

ಈಗ ಸೌತ್‌ವಾರ್ಕ್‌‌‌ನ ಲಂಡನ್‌ ಬರೋದ ಭಾಗವಾಗಿರುವ ನೆವಿಂಗ್ಟನ್‌ ಬಟ್ಸ್‌ ಎಂಬಲ್ಲಿ ಫ್ಯಾರಡೆ ಜನಿಸಿದ; ಆದರೆ ಈ ಪ್ರದೇಶವು ಅಂದು ಲಂಡನ್‌ ಸೇತುವೆಗೆ ಒಂದು ಮೈಲುಗಳಷ್ಟು ದಕ್ಷಿಣಕ್ಕಿದ್ದ ಸರ್ರೆಯ ಒಂದು ಉಪನಗರದ ಭಾಗವಾಗಿತ್ತು. ಅವನದು ಅಂಥಾ ಸ್ಥಿತವಂತರ ಕುಟುಂಬವಾಗಿರಲಿಲ್ಲ. ಅವನ ತಂದೆಯಾದ ಜೇಮ್ಸ್, ಕ್ರಿಶ್ಚಿಯನ್‌‌ ಧರ್ಮದ ಗ್ಲಾಸ್ಸೈಟ್‌ ಪಂಗಡದ ಓರ್ವ ಸದಸ್ಯನಾಗಿದ್ದ. 1790-1ರ ಚಳಿಗಾಲದ ಅವಧಿಯಲ್ಲಿ ವೆಸ್ಟ್‌ಮಾರ್ಲ್ಯಾಂಡ್‌‌‌ನಲ್ಲಿನ ಔತ್‌ಗಿಲ್‌‌ನಿಂದ ಲಂಡನ್‌ಗೆ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಜೇಮ್ಸ್‌‌ ಫ್ಯಾರಡೆ ಕಳಿಸಿಕೊಟ್ಟ; ಔತ್‌ಗಿಲ್‌ನಲ್ಲಿ ಓರ್ವ ಹಳ್ಳಿ ಕಮ್ಮಾರನ ಬಳಿ ಆತ ಓರ್ವ ಹೊಸಗಸುಬಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಅದೇ ವರ್ಷದ ಶರತ್ಕಾಲದಲ್ಲಿ ಮೈಕೇಲ್‌ ಜನಿಸಿದ. ನಾಲ್ಕು ಮಕ್ಕಳ ಪೈಕಿ ಮೂರನೆಯವನಾಗಿದ್ದ ಚಿಕ್ಕವಯಸ್ಸಿನ ಮೈಕೇಲ್‌ ಫ್ಯಾರಡೆಯು ಕೇವಲ ತಳಹದಿಯ ಶಾಲಾ ಶಿಕ್ಷಣವನ್ನಷ್ಟೇ ಪಡೆದಿದ್ದರಿಂದ, ಸ್ವತಃ ತನಗೆ ತಾನೇ ಕಲಿಯುವುದು ಬಹಳಷ್ಟಿತ್ತು. ಆತ ಹದಿನಾಲ್ಕು ವರ್ಷ ವಯಸ್ಸಿನವನಾಗಿದ್ದಾಗ, ಜಾರ್ಜ್‌ ರೈಬೌ ಎಂಬ ಓರ್ವ ಸ್ಥಳೀಯನ ಬಳಿಯಲ್ಲಿ ಹೊಸಗಸುಬಿಯಾಗಿ ಕೆಲಸಕ್ಕೆ ಸೇರಿಕೊಂಡ. ಜಾರ್ಜ್‌ ರೈಬೌ, ಪುಸ್ತಕಕ್ಕೆ ರಟ್ಟು ಕಟ್ಟುವುದರ ಜೊತೆಗೆ ಪುಸ್ತಕ ವ್ಯಾಪಾರಿಯೂ ಆಗಿದ್ದ. ತನ್ನ ಏಳು-ವರ್ಷಗಳ ಅವಧಿಯ ಶಿಷ್ಯವೃತ್ತಿಯಲ್ಲಿ ಆತ ಐಸಾಕ್‌ ವ್ಯಾಟ್ಸ್‌‌‌‌‌‌ನ ದಿ ಇಂಪ್ರೂವ್‌ಮೆಂಟ್‌ ಆಫ್‌ ದಿ ಮೈಂಡ್‌ ಪುಸ್ತಕವೂ ಸೇರಿದಂತೆ ಅನೇಕ ಪುಸ್ತಕಗಳನ್ನು ಓದಿದ, ಮತ್ತು ಅವು ಒಳಗೊಂಡಿದ್ದ ತತ್ತ್ವಗಳು ಹಾಗೂ ಸಲಹೆಗಳನ್ನು ಉತ್ಸಾಹದಿಂದ ಅಳವಡಿಸಿಕೊಂಡ. ವಿಜ್ಞಾನದಲ್ಲಿ, ಅದರಲ್ಲೂ ವಿಶೇಷವಾಗಿ ವಿದ್ಯುಚ್ಚಕ್ತಿಯ ವಿಷಯದಲ್ಲಿ ಅವನು ಒಂದು ಆಸಕ್ತಿಯನ್ನು ಬೆಳೆಸಿಕೊಂಡ. ನಿರ್ದಿಷ್ಟವಾಗಿ ಹೇಳುವುದಾದರೆ, ಜೇನ್‌ ಮಾರ್ಸೆಟ್‌ ಎಂಬಾತ ಬರೆದಿದ್ದ ಕಾನ್ವರ್ಸೇಷನ್ಸ್‌ ಇನ್‌ ಕೆಮಿಸ್ಟ್ರಿ ಎಂಬ ಪುಸ್ತಕದಿಂದ ಆತ ಅತೀವವಾಗಿ ಪ್ರಭಾವಿತನಾಗಿದ್ದ.

 ಮೈಕೇಲ್‌ ಫ್ಯಾರಡೆ (22 ಸೆಪ್ಟೆಂಬರ್‌‌ 1791 – 25 ಆಗಸ್ಟ್‌ 1867) ಓರ್ವ ಇಂಗ್ಲಿಷ್‌ ರಸಾಯನ ಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿಯಾಗಿದ್ದು (ಅಥವಾ ಆ ಕಾಲದ ಪರಿಭಾಷೆಯಲ್ಲಿ ಹೇಳುವುದಾದರೆ ಭೌತಶಾಸ್ತ್ರಜ್ಞ ), ವಿದ್ಯುತ್ಕಾಂತತೆ ಹಾಗೂ ವಿದ್ಯುದ್ರಸಾಯನಶಾಸ್ತ್ರ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ.



Monday, May 21, 2012

ಗೋಪಾಲದಾಸ

 

ಗೋಪಾಲದಾಸರ ಕಾಲ ಕ್ರಿ.ಶ.1721-1763.
ಜೀವನ
ರಾಯಚೂರು ಜಿಲ್ಲೆಯ, ದೇವನದುರ್ಗ ತಾಲೂಕಿನ, ಮಸರುಕಲ್ಲು ಗೋಪಾಲದಾಸರ ಜನ್ಮಸ್ಥಳ. ತಂದೆ ಮುರಾರಿ ಮತ್ತು ತಾಯಿ ವೆಂಕಮ್ಮನವರು. ಇವರು ದಾಸಕೂಟಕ್ಕೆ ಸೇರಿದ್ದು ಕೃಷಿಕರಾಗಿದ್ದರು. ಪೂರ್ವಾಶ್ರಮದ ಹೆಸರು ಭಾಗಣ್ಣ. ವಿಜಯದಾಸರು ಗೋಪಾಲದಾಸರಿಗೆ ಗುರುಗಳಾಗಿದ್ದರೆಂದು ತಿಳಿದುಬಂದಿದೆ. ಗೃಹಸ್ಥಾಶ್ರಮ ಸ್ವೀಕರಿಸಲಿಲ್ಲ.
ಕೃತಿಗಳು
 ಗೋಪಾಲ ವಿಠಲ ಎಂಬುದು ಗೋಪಾಲದಾಸರ ಅಂಕಿತವಾಗಿದೆ. ಇದಕ್ಕೂ ಮೊದಲು ವೆಂಕಟಕೃಷ್ಣ ಎನ್ನುವ ಅಂಕಿತದಲ್ಲಿ ಹಲವಾರು ಕೃತಿಗಳನ್ನು ರಚಿಸಿರಬಹುದೆಂಬ ಉಲ್ಲೇಖಗಳಿದ್ದರೂ ಸ್ವಷ್ಟ ಆಧಾರಗಳಿಲ್ಲ. ಈವರೆಗೆ ಲಭ್ಯವಾಗಿರುವ ಗೋಪಾಲದಾಸರ ಸಂಖ್ಯೆ 183.

ಎಂ.ಮರಿಯಪ್ಪಭಟ್ಟ


ಎಂ.ಮರಿಯಪ್ಪಭಟ್ಟ ಅವರು 1906ರಂದು ದಕ್ಷಿಣ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದವರು.ಬಹುಭಾಷ ವಿದ್ವಾಂಸರಾದ ಅವರು ದ್ರಾವಿಡ ಭಾಷೆಗಳನ್ನು ತುಲನಾತ್ಮಕ ಅಧ್ಯಯನ ಮಾಡುವುದರೊಂದಿಗೆ ನಿಘಂಟು ರಚನೆಯಲ್ಲಿ ಅನುಪಮ ಸೇವೆ ಗೈದವರು.ಮದ್ರಾಸು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ದುಡಿದರು.1980ರಲ್ಲಿ ಮರಣ ಹೊಂದರು.

ಕೃತಿಗಳು
ತುಳು-ಇಂಗ್ಲಿಷ್ ನಿಘಂಟು
ಅಭಿನವಮಂಗರಾಜನ ನಿಘಂಟು
ಜಾತಕತಿಲಕಂ
ಛಂದಸ್ಸಾರ
ಕನ್ನಡ ಸಾಹಿತ್ಯ ಚರಿತ್ರೆ
ಕನ್ನಡ ಸಂಸ್ಕೃತಿ

ಪ್ರಸಸ್ತಿ
ಕರ್ನಾಟಕ ಸರ್ಕಾರದ ಪುರಸ್ಕಾರ
ಸಾಹಿತ್ಯ ಅಕಾಡೆಮಿ ಪ್ರಸಸ್ತಿ

Tuesday, April 10, 2012

[ಕುವೆಂಪು]ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

Kuvempu.jpg


















ಕುವೆಂಪು - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (೧೯೦೪ - ೧೯೯೪) - ಕನ್ನಡವು ಪಡೆದ ಅತ್ಯುತ್ತಮ ಕವಿ, 'ರಾಷ್ಟ್ರಕವಿ'. ಜ್ಞಾನಪೀಠಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರಥಮ ವ್ಯಕ್ತಿ. 'ವಿಶ್ವ ಮಾನವ'. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ.
.ಜೀವನ.
ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳ್ಳಿ(ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾದರು.ಇವರು ಮೈಸೂರಿನ ಒಂಟಿಕೊಪ್ಪಲುವಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ). 
ವಿಶ್ವ ಮಾನವ ಸಂದೇಶ 

ಪ್ರತಿಯೊಂದು ಮಗುವೂ ಹುಟ್ಟುತ್ತಲೆ -ವಿಶ್ವ ಮಾನವ. ಬೆಳೆಯುತ್ತಾ ನಾವು ಅದನ್ನು ದೇಶ, ಭಾಷೆ, ಮತ, ಜಾತಿ,ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ”’ವಿಶ್ವಮಾನವ”’ನನ್ನಾಗಿ ಮಾಡುವುದೆ ವಿದ್ಯೆ, ಸಂಸ್ಕೃತಿ, ನಾಗರಿಕತೆಯ ಕರ್ತವ್ಯವಾಗಬೇಕು ಈ ದರ್ಶನವನ್ನೆ ’ವಿಶ್ವಮಾನವ ಗೀತೆ’ ಸಾರುತ್ತದೆ.
             ಓ ನನ್ನ ಚೇತನ,
             ಆಗು ನೀ ಅನಿಕೇತನ
             ರೂಪರೂಪಗಳನು ದಾಟಿ,
             ನಾಮಕೋಟಿಗಳನು ಮೀಟಿ,
             ಎದೆಯ ಬಿರಿಯೆ ಭಾವದೀಟಿ,
             ಓ ನನ್ನ ಚೇತನ,
             ಆಗು ನೀ ಅನಿಕೇತನ!
             ನೂರು ಮತದ ಹೊಟ್ಟ ತೂರಿ,
             ಎಲ್ಲ ತತ್ತ್ವದೆಲ್ಲೆ ಮೀರಿ,
             ನಿರ್ದಿಗನ೦ತವಾಗಿ ಏರಿ,
             ಓ ನನ್ನ ಚೇತನ,
             ಆಗು ನೀ ಅನಿಕೇತನ!
             ಎಲ್ಲಿಯೂ ನಿಲ್ಲದಿರು;
             ಮನೆಯನೆ೦ದೂ ಕಟ್ಟದಿರು;
             ಕೊನೆಯನೆ೦ದೂ ಮುಟ್ಟದಿರು;
             ಓ ಅನ೦ತವಾಗಿರು!
             ಓ ನನ್ನ ಚೇತನ,
             ಆಗು ನೀ ಅನಿಕೇತನ!
             ಅನ೦ತ ತಾನ್ ಅನ೦ತವಾಗಿ
             ಆಗುತಿಹನೆ ನಿತ್ಯಯೋಗಿ;
             ಅನ೦ತ ನೀ ಅನ೦ತವಾಗು;
             ಆಗು, ಆಗು, ಆಗು, ಆಗು,
             ಓ ನನ್ನ ಚೇತನ,
             ಆಗು ನೀ ಅನಿಕೇತನ! 
ಸಾಹಿತ್ಯ 
ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ಧಾರವಾಡದಲ್ಲಿ ನಡೆದ ೧೯೫೭ನೇ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷತೆ ವಹಿಸಿದ್ದರು. ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಇವರ ಶ್ರೀ ರಾಮಾಯಣ ದರ್ಶನಂ ಕೃತಿಯು
ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ
ಇವರು 'ಜೈ ಭಾರತ ಜನನಿಯ ತನುಜಾತೆ...' ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರು ಕವಿ. ಇವರು ಬರೆದ
'ಸ್ವಾಮಿ ವಿವೇಕಾನಂದ'ರ ಬಗೆಗಿನ ಕೃತಿ ಬಹಳ ಜನಪ್ರಿಯವಾದದ್ದು.
ಇವರ ವಿಶ್ವಮಾನವ ಸಂದೇಶ ಅತಿ ಪ್ರಸಿದ್ಡವಾಗಿದೆ.
 ಶ್ರೀ ರಾಮಾಯಣ ದರ್ಶನಂ 
ಕುವೆಂಪುರವರು ಬರೆದ ಈ ಕೃತಿಯು ಜ್ಞಾನಪೀಠಪ್ರಶಸ್ತಿ ಪುರಸ್ಕೃತವಾಗಿದೆ. ಕನ್ನಡದ ಅತ್ಯಮೂಲ್ಯ 
ಗ್ರಂಥಗಳಲ್ಲಿ ಒಂದು, ಈ ಕೃತಿ. ಈ ಕೃತಿ ಕನ್ನಡದ ಮೊದಲ ಆಧುನಿಕ ಮಹಾಕಾವ್ಯ; 
ಸರಳರಗಳೆಯನ್ನು ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಬಳಸಲಾಗಿದೆ. 
ಕೃತಿಗಳು
ಕಾದಂಬರಿ:
ಕಾನೂರು ಹೆಗ್ಗಡತಿ (ಚಲನ ಚಿತ್ರವಾಗಿದೆ)
 ಮಲೆಗಳಲ್ಲಿ ಮದುಮಗಳು (ಧಾರಾವಾಹಿಯಾಗಿದೆ)
ನಾಟಕಗಳು:
  ಬೆರಳ್ಗೆ ಕೊರಳ್
 ಶೂದ್ರ ತಪಸ್ವಿ 
 ಸ್ಮಶಾನ ಕುರುಕ್ಷೇತ್ರ
 ರಕ್ತಾಕ್ಷಿ
 ಬಿರುಗಾಳಿ
 ಯಮನ ಸೋಲು
 ನನ್ನ ಗೋಪಾಲ (ಮಕ್ಕಳ ನಾಟಕ)
 ವಾಲ್ಮೀಕಿಯ ಭಾಗ್ಯ
 ಮಹಾರಾತ್ರಿ
 ಜಲಗಾರ
 ಚಂದ್ರಹಾಸ
 ಬಲಿದಾನ
ಮೋಡಣ್ಣನ ತಮ್ಮ (ಮಕ್ಕಳ ನಾಟಕ) 
ಚಿತ್ರ ಪ್ರಬಂಧ:
 ಮಲೆನಾಡಿನ ಚಿತ್ರಗಳು 
ಆತ್ಮ ಚರಿತ್ರೆ:
 ನೆನಪಿನ ದೋಣಿಯಲ್ಲಿ 
ಕಾವ್ಯಗಳು:
 ಶ್ರೀ ರಾಮಾಯಣ ದರ್ಶನ೦
 ಕೊಳಲು
 ಅಗ್ನಿಹಂಸ
 ಅನಿಕೇತನ
 ಅನುತ್ತರಾ
 ಇಕ್ಶುಗಂಗೋತ್ರಿ
 ಕದರಡಕೆ
 ಕಥನ ಕವನಗಳು
 ಕಲಾಸುಂದರಿ
 ಕಿಂಕಿಣಿ
 ಕೃತ್ತಿಕೆ
 ಜೇನಾಗುವ
 ನವಿಲು
 ಪಕ್ಷಿಕಾಶಿ
 ಚಿತ್ರಾಂಗದಾ
 ಪ್ರೇತಕ್ಯು
 ಪ್ರೇಮಕಾಶ್ಮೀರ
 ಮಂತ್ರಾಕ್ಷತೆ
 ಷೋಡಶಿ
 ಹಾಳೂರು
 ಕೋಗಿಲೆ
 ಪಾಂಚಜನ್ಯ
 ಕುಟೀಚಕ 
ಕಥಾಸಂಕಲನ:
ನನ್ನ ದೇವರು ಮತ್ತು ಇತರ ಕಥಗಳು

ಅಮರೇಶ ನುಗಡೋಣಿ


 

 ಅಮರೇಶ ನುಗಡೋಣಿ ಇವರು  ೧೯೬೦ರಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನುಗಡೋಣಿಯಲ್ಲಿ ಜನಿಸಿದರು.

ವೃತ್ತಿ

ಅಮರೇಶ ನುಗಡೋಣಿಯವರು ಹಂಪೆಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ.

ಕೃತಿಗಳು  

ಕವನ ಸಂಕಲನ

  • ನೀನು, ಅವನು, ಪರಿಸರ

ಕಥಾಸಂಕಲನ

  • ಮಣ್ಣು ಸೇರಿತು ಬೀಜ
  • ಅರಿವು (ನವಸಾಕ್ಷರರಿಗಾಗಿ)
  • ತಮಂಧದ ಕೇಡು
  • ಮುಸ್ಸಂಜೆಯ ಕಥಾನಕಗಳು
  • ಸವಾರಿ