ಜೀವನ
ರಾಯಚೂರು ಜಿಲ್ಲೆಯ, ದೇವನದುರ್ಗ ತಾಲೂಕಿನ, ಮಸರುಕಲ್ಲು ಗೋಪಾಲದಾಸರ ಜನ್ಮಸ್ಥಳ. ತಂದೆ ಮುರಾರಿ ಮತ್ತು ತಾಯಿ ವೆಂಕಮ್ಮನವರು. ಇವರು ದಾಸಕೂಟಕ್ಕೆ ಸೇರಿದ್ದು ಕೃಷಿಕರಾಗಿದ್ದರು. ಪೂರ್ವಾಶ್ರಮದ ಹೆಸರು ಭಾಗಣ್ಣ. ವಿಜಯದಾಸರು ಗೋಪಾಲದಾಸರಿಗೆ ಗುರುಗಳಾಗಿದ್ದರೆಂದು ತಿಳಿದುಬಂದಿದೆ. ಗೃಹಸ್ಥಾಶ್ರಮ ಸ್ವೀಕರಿಸಲಿಲ್ಲ.
ಕೃತಿಗಳು
ಗೋಪಾಲ ವಿಠಲ ಎಂಬುದು ಗೋಪಾಲದಾಸರ ಅಂಕಿತವಾಗಿದೆ. ಇದಕ್ಕೂ ಮೊದಲು ವೆಂಕಟಕೃಷ್ಣ ಎನ್ನುವ ಅಂಕಿತದಲ್ಲಿ ಹಲವಾರು ಕೃತಿಗಳನ್ನು ರಚಿಸಿರಬಹುದೆಂಬ ಉಲ್ಲೇಖಗಳಿದ್ದರೂ ಸ್ವಷ್ಟ ಆಧಾರಗಳಿಲ್ಲ. ಈವರೆಗೆ ಲಭ್ಯವಾಗಿರುವ ಗೋಪಾಲದಾಸರ ಸಂಖ್ಯೆ 183.
No comments:
Post a Comment